ಉತ್ತರ ಬಂಗಾಳವು ಮಳೆಗಾಲದ ಸಮಯದಲ್ಲಿ ಸತತವಾಗಿ ಭೂಕುಸಿತಗಳನ್ನು ಅನುಭವಿಸುತ್ತದೆ. ಹಾಗಾಗಿ, ಯಾರೊಬ್ಬರೂ ಈ ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಲು ಆಲೋಚಿಸುವುದಿಲ್ಲ. ಅದಾಗ್ಯೂ, ಒಂದೊಮ್ಮೆ ನೀವು ಮಳೆಗಾಲದಲ್ಲಿ ಈ ಸ್ಥಳವನ್ನು ಬೇಟಿಮಾಡಿದ್ದೇ ಆದಲ್ಲಿ, ನೀವು ಮತ್ತೊಮ್ಮೆ ಈ ಪ್ರದೇಶವನ್ನು ಪ್ರೀತಿಸದಿರಲು ಸಾಧ್ಯವಿಲ್ಲ! ಮಳೆಗಾಲದ ಸಮಯದಲ್ಲಿ ಉತ್ತರ ಬಂಗಾಳದಲ್ಲಿ ಒಂದು ರಜೆಯನ್ನು ಯೋಜಿಸಿ ಮತ್ತು ಈ ಸ್ಥಳಗಳನ್ನು ಭೇಟಿ ಮಾಡಿ:
ಕೊರೊನೇಷನ್ ಸೇತುವೆ: ಟೀಸ್ಟ ನದಿಯ ಮೇಲಿನ ಈ ಸೇತುವೆಯು ಕಣ್ಣಿಗೆ ಆನಂದಮಯವಾದುದು. ಮಳೆಗಾಲದಲ್ಲಿ ನದಿಯ ನೀರು ಅತಿ ಎತ್ತರವಾಗಿ ಹರಿಯುತ್ತದೆ ಹಾಗು ಆಳವಿಲ್ಲದ ಸ್ಥಳದಲ್ಲಿಯೂ ಸಹ ವಿದ್ಯುತ್ ಬಲವಾಗಿರುತ್ತದೆ. ನೀವು ಅದರ ಸೌಂದರ್ಯವನ್ನು ಸೇತುವೆಯಿಂದ ಆಸ್ವಾದಿಸಬಹುದು ಹಾಗು ಹತ್ತಿರದ ಸೇವಕೇಶ್ವರಿ ದೇವಸ್ಥಾನವನ್ನು ಭೇಟಿ ಮಾಡಿ.
ಗಜೊಲ್ದೊಬ: ಅದು ಟೇಸ್ಟ ಆಣೆಕಟ್ಟಿನ ಹತ್ತಿರದಲ್ಲಿದೆ. ಆಣೆಕಟ್ಟು ಟೀಸ್ಟ ನೀರಿನ ದಿಕ್ಕು ಬದಲಿಸುವುದು (ಅದು ಬಾಂಗ್ಲಾದೇಶವನ್ನು ಪ್ರವೇಶಿಸುವ ಮುನ್ನ) ಸಹ ಮಳೆಗಾಲದಲ್ಲಿ ಭೇಟಿಗೆ ಮತ್ತೊಂದು ಸುಂದರವಾದ ಸ್ಥಳ. ಕಾಲುವೆಯ ಹತ್ತಿರ ಸಂಚರಿಸುವುದು ಸಹ ಬಹಳ ಉತ್ತಮವಾದುದು; ಕಾಲುವೆಯ ಮತ್ತೊಂದು ಬದಿಯಲ್ಲಿ ಕಾಡು ಪ್ರದೇಶವಿದೆ ಮತ್ತು ನೀವು ಅದೃಷ್ಟಶಾಲಿಯಾದರೆ, ಕೆಲವು ಕಾಡು ಪ್ರಾಣಿಗಳನ್ನು ಸಹ ನೀವು ಕಾಣಬಹುದು.
ಸಾಮ್ಸಿಂಗ್/ಸುಂತಲೇಖೊಲ: ಮಳೆಗಾಲದ ಸಮಯದಲ್ಲಿ ಸಾಮ್ಸಿಂಗ್ ಅಥವಾ ಸುಂತಲೇಖೊಲಕ್ಕೆ ಭೇಟಿ ನೀಡುವುದು ನಿಮಗೆ ಉಸಿರುಬಿಗಿಹಿಡಿಯು ಪ್ರಕೃತಿ ಸೌಂದರ್ಯದ ಪುರಸ್ಕಾರ ದೊರೆಯುತ್ತದೆ. ಆದರೆ ಇಲ್ಲಿಗೆ ತಲುಪುವ ಮೊದಲು ವಾತವರಣವನ್ನು ತಿಳಿದುಕೊಳ್ಳಿ ಹಾಗು ಬೆಟ್ಟದಿಂದ ಇಳಿಯಲು ಮತ್ತು ನಿಮ್ಮ ರೈಲನ್ನು ಹಿಡಿಯಲು ಒಂದು ದಿನದ ಅವಧಿಯನ್ನು ಕೈಲಿಟ್ಟುಕೊಂಡಿರಿ (ಅಧಿಕ ಮಳೆಯ ಸಾಧ್ಯತೆಯ ಕಾರಣದಿಂದಾಗಿ).
ದುದಿಯ: ಮಿರಿಕ್-ಡಾರ್ಜಿಲಿಂಗ್ ಮುಖಾಂತರ ಡಾರ್ಜಿಲಿಂಗ ಮಾರ್ಗದಲ್ಲಿ, ದುದಿಯ ಒಂದು ಸೇನೆಯ ಗುಂಡು ಹಾರಿಸುವ ಪ್ರದೇಶ ಬಲಸೊನ್ ನದಿಯ ಪಕ್ಕದಲ್ಲಿದೆ. ನೀವು ಬಲಶಾಲಿ ಬೆಟ್ಟಗಳ ಸೌಂದರ್ಯವನ್ನು ಸವಿಯಲು, ನದಿಯ ದಡದಲ್ಲಿನ ಕಲ್ಲುಬಂಡೆಯ ಮೇಲೆ ಕುಳಿತುಕೊಳ್ಳಬಹುದು ಅಥವಾ ಒಂದು ಕಪ್ ಚಹಗಾಗಿ ಹತ್ತಿರದ ಗೊಕುಲ್ ವೇಸೈಡ್ ಇನ್ನ್ ಗೆ ಭೇಟಿ ನೀಡಬಹುದು.
ತಲುಪುವುದು ಹೇಗೆ?
ಹತ್ತಿರದ ರೈಲ್-ಹೆಡ್ – ಹೊಸ ಜಲ್ ಪೈಗುರಿ. ಒಂದು ಟ್ಯಾಕ್ಸಿ ಅಥವಾ ಶೇರ್ ಕ್ಯಾಬ್ ಅನ್ನು ಸಹ ಬಾಡಿಗೆಗೆ ಪಡೆಯಬಹುದು.